2025, Vol. 11 Issue 1, Part B
ಬಸವಣ್ಣನವರ ವಚನಗಳಲ್ಲಿ ಸಮಾನತೆ
Author(s): ಜಯಶ್ರೀ. ಯ. ಮುಗಳಿ
Abstract: ಬಸವಣ್ಣನವರ ಕಾಲಾವಧಿಯಲ್ಲಿ ಕಂಡು ಬರುವ ಅನಿಷ್ಠ ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಮೂಡನಂಬಿಕೆಗಳು, ಡಾಂಭಿಕತನ, ರಾಜಕೀಯ ಅಸ್ಥಿರತೆ, ಆರ್ಥಿಕ ಅಸಮಾನತೆ, ಸ್ತ್ರೀಯರಿಗೆ ಸ್ವಾತಂತ್ರ್ಯ ಇಲ್ಲದಿರುವುದು ಮತ್ತು ಧಾರ್ಮಿಕ ಕಾರ್ಯಕ್ಷೇತ್ರಗಳಲ್ಲಿ ವರ್ಗದವರಿಗೆ ಅವಕಾಶವಿಲ್ಲದಿರುವುದು ಇವೆಲ್ಲವುಗಳ ಕಾರಣದಿಂದ ಅವರು ಹೊಸ ಸಮಾಜವನ್ನು ನಿರ್ಮಿಸುವುದರ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತರಲು ಪ್ರಯತ್ನಿಸಿದರು. ಸಮಾಜದ ಪ್ರತಿಯೊಂದು ಹಂತದಲ್ಲಿ ತನ್ನದೇ ಆದ ವಿಚಾರಗಳ ಮೂಲಕ ಕ್ರಾಂತಿ ಮಾಡಿ ಸಮಾನತೆಯ ನೆಲೆಗಟ್ಟಿನ ಮೇಲೆ ಹೊಸ ಸಮಾಜವನ್ನು ಕಟ್ಟ ಬಯಸಿದರು. ತಮ್ಮ ವೈಚಾರಿಕ ವಿಚಾರಗಳಿಂದ ಸಮಾಜಕ್ಕೆ ಹೊಸ ಬೆಳಕನ್ನು ತಂದುಕೊಟ್ಟು ಇಡೀ ಮನುಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ. ಇವರ ಮೂಲ ಉದ್ದೇಶ ಸಮಾಜಕ್ಕೆ, ಧರ್ಮಕ್ಕೆ ಅಂಟಿಕೊಂಡು ಬಂದಿದ್ದ ರೋಗವನ್ನು ನಿವಾರಣೆ ಮಾಡಿ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲುಬೇಕಾದಂತಹ ಪರಿಸರವನ್ನು ಅವರು ಒದಗಿಸಿದರು, ಅಂತಹ ಹಲವಾರು ದೃಷ್ಟಿಕೋನವನ್ನು ಹೊಂದಿರುವ ಅವರ ವಚನಗಳಲ್ಲಿ ಕಾಣಬಹುದು.
Pages: 114-117 | 88 Views 47 Downloads