Contact: +91-9711224068

Kannada Journal

International Journal of Kannada Research

  • Printed Journal
  • Indexed Journal
  • Refereed Journal
  • Peer Reviewed Journal

Impact Factor: RJIF 4.89

ಜಾಗತೀಕರಣದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ರೂಪಿಸಿದ ಹೋರಾಟಗಳು

2024, Vol. 10 Issue 1, Part B
ಜಾಗತೀಕರಣದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ರೂಪಿಸಿದ ಹೋರಾಟಗಳು
Author(s): ದಿನೇಶ.ಎನ್.ಎನ್. ಪ್ರೊ.ಕೆ.ಆರ್.ಶಾನಿ
Abstract: ಜಾಗತೀಕರಣ ಎಂಬ ಪರಿಕಲ್ಪನೆಯು ಬಹು ರಾಷ್ಟ್ರೀಯ ಕಂಪನಿಗಳು ಆರ್ಥಿಕವಾಗಿ ಲಾಭಗಳಿಸುವ ಯೋಜನೆಯಾಗಿದೆ. ವಿಶ್ವಬ್ಯಾಂಕು ಹಲವು ಸುಧಾರಣೆಗಳನ್ನು ಸೂಚಿಸಿದ್ದು ಅದರಲ್ಲಿ ಬಿತ್ತನೆಬೀಜ, ರಸಗೊಬ್ಬರ ಮತ್ತು ಕೃಷಿ ಉಪಕರಣಗಳ ಮೇಲಿನ ಸಬ್ಸಿಡಿ ತೆಗೆದು ಹಾಕುವುದು ಸಹ ಒಂದಾಗಿದೆ. ಹೀಗಾಗಿ ಅಂತರರಾಷ್ಟ್ರೀಯ ಸಂಸ್ಥೆಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ರಸಗೊಬ್ಬರದ ಬೆಲೆ ಏರಿಕೆ ಮಾಡಿ, ಸಬ್ಸಿಡಿ ತೆಗೆಯುವ ಹುನ್ನಾರ ಮಾಡಿತ್ತು. ಆಮೇರಿಕಾ ಮೂಲದ ಕಾರ್ಗಿಲ್ ಮತ್ತು ಮಾನ್ಸಾಂಟೋ ಬಿತ್ತನೆಬೀಜ ಕಂಪನಿಗಳು, ಕರ್ನಾಟಕದಲ್ಲಿ ಬೆಂಗಳೂರು, ಬಳ್ಳಾರಿ ಮುಂತಾದ ಕಡೆಗಳಲ್ಲಿ ಸ್ಥಾಪಿತವಾದವು. ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಬಿತ್ತನೆ ಬೀಜಗಳನ್ನು ತಿರಸ್ಕರಿಸಿ ಹೋರಾಟ ಮಾಡಿದ ‘ಕರ್ನಾಟಕ ರಾಜ್ಯ ರೈತ ಸಂಘ’ ಅದಕ್ಕೆ ಪರ್ಯಾಯವಾಗಿ ‘ಸ್ವದೇಶಿ ಬೀಜ ಮಾರಾಟ ಚಳುವಳಿ’ ರೂಪಿಸಿತು. ‘ಕೆಂಚುಕಿ ಫ್ರೈಡ್ ಚಿಕನ್’(ಕೆ.ಎಫ್.ಸಿ.)ಅಮೇರಿಕಾ ಮೂಲದ ಬಹುರಾಷ್ಟ್ರೀಯ ಕಂಪನಿಯ ಚಿಕನ್ ರೆಸ್ಟೋರೆಂಟ್ ಆಗಿದ್ದು, ಭಾರತದಲ್ಲಿ ತನ್ನ ಮೊಟ್ಟಮೊದಲ ಮಳಿಗೆಯನ್ನು 1995ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತೆರೆದಿದ್ದರ ಪರಿಣಾಮ ಆಹಾರದಲ್ಲಿ ‘ಮೊನೋಸೋಡಿಯಂ ಗ್ಲುಟಾಮೇಟ್’ ಎಂಬ ರಾಸಾಯನಿಕ ಹೆಚ್ಚು ಇದ್ದು ಇದು ಮಾನವರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿತ್ತು. ಅದ್ದರಿಂದ ಪ್ರಸ್ತುತ ಈ ಲೇಖನವು ಜಾಗತೀಕರಣದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ರೂಪಿಸಿದ ಹೋರಾಟಗಳ ಕುರಿತು ಚರ್ಚಿಸುತ್ತದೆ.
ಅಧ್ಯಯನದ ಉದ್ದೇಶ: ಕರ್ನಾಟಕ ರಾಜ್ಯ ರೈತ ಸಂಘ ಜಾಗತೀಕರಣದ ವಿರುದ್ದ ರೂಪಿಸಿದ ಹೋರಾಟಗಳನ್ನು ವಿಶ್ಲೇಷಿಸಲಾಗುವುದು.
Pages: 84-88  |  68 Views  34 Downloads


International Journal of Kannada Research
How to cite this article:
ದಿನೇಶ.ಎನ್.ಎನ್. ಪ್ರೊ.ಕೆ.ಆರ್.ಶಾನಿ. ಜಾಗತೀಕರಣದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ರೂಪಿಸಿದ ಹೋರಾಟಗಳು. Int J Kannada Res 2024;10(1):84-88.
Related Journal Subscription
International Journal of Kannada Research

International Journal of Kannada Research

Call for book chapter
Journals List Click Here Research Journals Research Journals
International Journal of Kannada Research