2022, Vol. 8 Issue 3, Part A
ಬಸವಣ್ಣನವರ ವಚನಗಳಲ್ಲಿ ಮಾನವ ಹಕ್ಕುಗಳು
Author(s): ಕನ್ಯಾಕುಮಾರಿ.ಎಸ್
Abstract: ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಬಗ್ಗೆ ಕಾಳಜಿ ಮತ್ತು ಅರಿವು ಹೆಚ್ಚಾಗುತ್ತಿದ್ದು, ಇವು ನಾಗರೀಕತೆ, ಸಮಾಜ ಮತ್ತು ಋಣಾತ್ಮಕ ನ್ಯಾಯ /ಸಾಮಾಜಿಕ ನ್ಯಾಯಗಳ ಮೌಲ್ಯಮಾಪನಗಳಾಗಿವೆ.
ಮಾನವೀಯತೆ ಮತ್ತು ಮಾನವೀಯತೆಯ ಬೆಳವಣಿಗೆಯ ಇತಿಹಾ¸ದುದ್ದಕ್ಕು ವಿಭಿನ್ನ ರೂಪದ ಸಮಾಜಗಳು -ಉಪಸಮಾಜಗಳು ಹಾಗು ಸಾಮಾಜಿಕ -ಆರ್ಥಿಕ- ಶೈಕ್ಷಣಿಕ ಜೀವನದಲ್ಲಿ ಅಸಮಾನತೆಗಳು ವ್ಯಾಪಕÀವಾಗಿರುವುದಕ್ಕೆ ವಿಶ್ವ ಸಾಕ್ಷಿಯಾಗಿದೆ. ಹಾಗು ಈ ಬೆಳವಣಿಗೆ ಮಾನವಹಕ್ಕುಗಳ ಉಲ್ಲಂಘನೆಗೂ ಕಾರಣವಾಗಿದೆ.
ಆದರೆ ಬಸವಣ್ಣನವರ ಕಾಲದಲ್ಲಿ ಮಾನವೀಯತೆಗೆ ಪ್ರಾಧನ್ಯತೆ ನೀಡಲಾಯಿತು. ಮಾನವಹಕ್ಕುಗಳುಪ್ರಾಯೋಗಿಕವಾಗಿ ಕಾರ್ಯರೂಪದಲ್ಲಿದ್ದವು ಎಂಬುದು ಅತ್ಯಂತ ಗಮನೀಯವಾದ ಅಂಶ. ಹನ್ನೆರಡನೆಯ ಶತಮಾನದಲ್ಲಿಯೆ ವಿಶ್ವಮಾನವ ಬಸವಣ್ಣ ಸಾರ್ವತ್ರಿಕವಾಗಿ ಎಲ್ಲರಿಗೂ ಮಾನವ ಹಕ್ಕುಗಳು ಅನ್ವಯವಾಗಬೇಕೆಂದು ಘೋಷಿಸಿ, ಸಾರ್ವತ್ರಿಕ ಭಾತೃತ್ವವನ್ಮುಪ್ರತಿಪಾದಿಸಿದರು ಹಾಗು ಸಮಾನತೆಯ ತತ್ವವನ್ನು ಕಾರ್ಯರೂಪಕ್ಕೆ ತಂದರು.
ಬಸವಣ್ಣ ನವರ ವಚನಗಳಲ್ಲಿ ಬರುವ ಮಾನವ ಹಕ್ಕುಗಳು ಮತ್ತು ಸಮಾಜಕ್ಕೆ ಸಂಭಂದಿಸಿದ ಆಯ್ದ ಕೆಲವು ವಿಚಾರಗಳನ್ನು ಈ ಪ್ರಬಂಧದ ಮೂಲಕ ವಿಶ್ಲೇಷಿಸಲಾಗಿದೆ.
Pages: 05-07 | 604 Views 202 Downloads
How to cite this article:
ಕನ್ಯಾಕುಮಾರಿ.ಎಸ್. ಬಸವಣ್ಣನವರ ವಚನಗಳಲ್ಲಿ ಮಾನವ ಹಕ್ಕುಗಳು. Int J Kannada Res 2022;8(3):05-07.